Slide
Slide
Slide
previous arrow
next arrow

ಅಭಿಮಾನದ ಅಭಿನಂದನೆಗಳು- ಜಾಹೀರಾತು

300x250 AD

ಮತದಾರ ಮಹನೀಯರಿಗೆ ಅಭಿಮಾನದ ಅಭಿನಂದನೆಗಳು

ಧಾರವಾಡ ಹಾಲು ಒಕ್ಕೂಟಕ್ಕೆ ಶಿರಸಿ ತಾಲೂಕಿನಿಂದ ನಿರ್ದೇಶಕ ಸ್ಥಾನ ನಡೆದ ಚುನಾವಣೆಯಲ್ಲಿ ನನ್ನ ಮೇಲೆ ಅಭಿಮಾನದಿಂದ ವಿಶ್ವಾಸವಿಟ್ಟು ಅತ್ಯಮೂಲ್ಯವಾದ ಮತವನ್ನು ನೀಡಿ, ಮೂರನೇ ಅವಧಿಗೆ ಆಯ್ಕೆ ಮಾಡುವ ಮೂಲಕ ಹ್ಯಾಟ್ರಿಕ್ ಗೆಲುವನ್ನು ನೀಡಿದ ಮತದಾರ ಮಹನೀಯರಿಗೆ ಮನದಾಳದ ಅಭಿನಂದನೆಯನ್ನು ಸಲ್ಲಿಸುತ್ತೇನೆ.

ನನ್ನ ಅವಧಿಯಲ್ಲಿ ಒಕ್ಕೂಟದಿಂದ ದೊರೆಯುವ ಅನುಕೂಲವನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರ ಪ್ರತಿಫಲ ಈ ಗೆಲುವಾಗಿದೆ. ಇದು ಕೇವಲ ನನ್ನೊಬ್ಬನ ಗೆಲುವಲ್ಲ, ಬದಲಾಗಿ ಕ್ಷೇತ್ರದ ಸಮಸ್ತ ಹೈನುಗಾರರ ಗೆಲುವಾಗಿದೆ. ನನ್ನ ಈ ಅವಧಿಯಲ್ಲಿ ಒಕ್ಕೂಟದಿಂದ ದೊರೆಯುವ ಅತಿಹೆಚ್ಚು ಅನುಕೂಲವನ್ನು ಹಾಲು ಉತ್ಪಾದಕ ಸಂಘದ ಸದಸ್ಯರಿಗೆ ಮತ್ತು ಸಂಘಗಳಿಗೆ ಮಾಡಿಕೊಡಲು ಪ್ರಯತ್ನ ಮಾಡುವ ವಿಶ್ವಾಸ ನನ್ನದು.

ನನ್ನ ಗೆಲುವಿಗೆ ಸಹಕರಿಸಿದ ಎಲ್ಲ ಮಹನೀಯರಿಗೆ ಅಭಿಮಾನದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮುಂದೆಯೂ ತಮ್ಮೆಲ್ಲರ ಪ್ರೀತಿ-ವಿಶ್ವಾಸ ನನ್ನ ಮೇಲಿರಲಿ ಎಂಬ ಕಿರು ಆಶಯ ನನ್ನದು. ಧನ್ಯವಾದಗಳು..

300x250 AD

ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ
ನೂತನ ನಿರ್ದೇಶಕರು, ಧಾರವಾಡ ಹಾಲು ಒಕ್ಕೂಟ, ಶಿರಸಿ

Share This
300x250 AD
300x250 AD
300x250 AD
Back to top